ಬಣ್ಣದ ಬಯಲು

ಸಂಭ್ರಮದಲಿ ಬೆಳಕ್ಕಿ ಸಾಲು
ರೆಕ್ಕೆ ಬಿಚ್ಚಿ ಬಾನು ತುಂಬ ಹಾರಾಡಿ
ತಣಿ ತಣಿದು ಊರ ಹೊಲಗದ್ದೆಗಳ
ಸ್ಪರ್ಶಿಸಿ ಬೆಟ್ಟದ ಮೇಲೆ ನೆರಳು ಹಾಯಿಸಿದವು.

ಎಲ್ಲಾ ಜೀವಿಗಳ ನಿಟ್ಟುಸಿರು ಹೊತ್ತ
ಮೋಡಗಳು ಮಳೆ ಬೀಜ ಬಿತ್ತಿವೆ
ಆಷಾಢದ ಸಂಭ್ರಮ ಸಜ್ಜಾಗಿದೆ
ಗಡಿಯಾರದ ಮುಳ್ಳುಗಳು ಹಾಗೆ ಸರಿದುಹೋಗುತ್ತದೆ.

ರಸ್ತೆಯಲಿ ಜನ ಜಾತ್ರೆ ಹಬ್ಬ ಮದುವೆ
ಮುಂಜಾವಿಗೆ ಹಾಗೆ ಒಟ್ಟೊಟ್ಟಿಗೆ ಸಾಗಿ
ಸಂವತ್ಸರದ ನಡುವೆ ಪ್ರಾರಂಭಿಸಿದಾಗ
ಅನುಭವದ ಕಣ್ಣಿನೊಳಗೆ ಹಸ್ತ ಚಿತ್ತ ಸ್ವಾತಿ ಅರಳಿವೆ.

ಹಾಗೆ ಉಳಿದ ದಾರಿ ತೋಟಗದ್ದೆ
ಪಕ್ಷಿ ಸಂಕುಲ ತಮ್ಮ ಹಾಡು ಹಾಡಿವೆ
ತಾಯಿ ಒಡಲ ತುಂಬ ಶಕ್ತಿ ಹರಿದು
ಹರಸಿವೆ ಬಿಗುಬಿನ್ನಾಣಗಳಿರದೆ ಚಿಮ್ಮಿದೆ ಪ್ರೀತಿ.

ಸಾಲು ಸಾಲು ಹಂತೀ ಕಟ್ಟಿ
ಊರಿದ ಬೀಜಗಳು ಮೊಳೆತು ಚಿಗಿತು
ಒಡಲ ತುಂಬ ಹಸಿರು ನವಿಲು ನಾಟ್ಯ
ಕವಿತೆ ಬದುಕು ಎರಡೂ ಖುಷಿಯಿಂದ ಅರಳಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ವೀಣೆಯು ಮಲಗಿದೆ!
Next post ಸೂರ್ಯ ಕಲಾಕಾರ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys